Latest

ನಿಟ್ಟೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ವೃಂದಾವನ ಧ್ಯಾನ ಕೇಂದ್ರ ದ ವಾರ್ಷಿಕೋತ್ಸವ

Share
Share
ಕಾರ್ಕಳ  : ನಿಟ್ಟೆಯ ವೃಂದಾವನ ಧ್ಯಾನ ಕೇಂದ್ರದ ಮಾರ್ಚ್ ೧ರಂದು ಜರಗಿತು. ಸಮಾರಂಭದ ಅಧ್ಯಕ್ಷತೆ ಯನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ದ ಹುಬ್ಬಳ್ಳಿ ವಲಯದ ಸಂಚಾಲಕಿ ರಾಜಯೋಗಿನೀ ಬ್ರಹ್ಮ ಕುಮಾರಿ ನಿರ್ಮಲಾಜೀ ಯವರು ವಹಿಸಿದ್ದು ಶಿವನ ಅವತರಣೆಯೇ ಸತ್ಯ ಶಿವರಾತ್ರಿ ಯಾಗಿದ್ದು ನಿಟ್ಟೆ ಧ್ಯಾನ ಮಂದಿರದ ೨ನೇ ವಾರ್ಷಿಕೋತ್ಸವ ಹಾಗೂ ೯೦ನೇ ಮಹಾ ಶಿವರಾತ್ರಿ ಹಬ್ಬದ ಈ ಸಂದರ್ಭದಲ್ಲಿ ಪರಮಾತ್ಮ ಕಲಿಸುವ ರಾಜಯೋಗ ಶಿಕ್ಷಣ ವನ್ನು ಕಲಿತು ಜೇವನವನ್ನು ಪಾವನಗೊಳಿಸಲು ಕರೆ ನಿಡಿದರು. ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾ ನಿಲಯದ ನಿರ್ದೇಶಕರಾದ ಬಿ. ಯೋಗೀಶ್ ಹೆಗ್ಡೆ, ಅಮೇರಿಕದ ನಿವೃತ್ತ ಕ್ಯಾನ್ಸರ್ ಸಂಶೋಧಕರಾದ ನೇಮಿರಾಜ್ ರೈ, ನಿಟ್ಟೆ ಪಂಚಯಾತ್ ಅಭಿವದ್ಧಿ ಅಧಿಕಾರಿ ಆನಂದ್ ವರ್ತಿ, ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾ ಲಯದ ಮುಂಬೈ ಕಲ್ಯಾಣ್ ಉಪ ವಿಭಾಗ ದ ನಿರ್ದೇಶಕಿ ರಾಜಯೋಗಿಣಿ ಬ್ರಹ್ಮ ಕುಮಾರಿ ಅಲಕಾ, ಥೈಲ್ಯಾಂಡ್ ನ ಬಿ. ಕೆ. ಕೈಲಾಸ ಲಾದ. ಮತ್ತು ಬಿ. ಕೆ. ಶಾಂತ ಲಾದ ಶುಭಾ ಹಾರೈಸಿದರು. ಬಿ. ಕೆ. ಮನೋಹರ್ ಸ್ವಾಗತಸಿ, ಬಿ. ಕೆ. ಯಶೋಧರವರು ಕಾರ‍್ಯಕ್ರಮ ನಿರ್ದೇಶಿಸಿದರು. ಕೆಮಣ್ಣು ದೇವಸ್ಥಾನ ದ ದ್ವಾರದಿಂದ ಪರಪಾಡಿ ದುರ್ಗಾ ನಗರದ ಸೇವಾ ಕೇಂದ್ರ ದ ವರೆಗೆ ಶೋಭಾ ಯಾತ್ರೆ ನಡೆಯಿತು ಕೊನೆಗೆ ಮನೋರಂಜನ ಕಾರ‍್ಯಕ್ರಮ ನಡೆಯಿತು.ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ದ ವರಿಷ್ಟ ಸಹೋದರಿ ಯರಿಗೆ ಅಭಿನಂದಿಸಿ ಗೌರವಿಸಲಾಯಿತು.
Share

Leave a comment

Leave a Reply

Your email address will not be published. Required fields are marked *